ಅಜ್ಜ ನಡೆದ ಹಾದಿಯಲ್ಲೀಗ ಗರಿಕೆ ಹುಟ್ಟಿದೆ.



ಅಜ್ಜ ಇನ್ನೊಂದಷ್ಟು ವರ್ಷ ಇರಬೇಕಿತ್ತು..



ಈ ಮಾತನ್ನ ಒಂದು ವರ್ಷದೊಳಗೆ ಅದೆಷ್ಟು ಸಲ ಹೇಳಿದ್ದೇನೋ ಲೆಕ್ಕವಿಲ್ಲ‌. ಇವತ್ತಿಗೂ ಅಜ್ಜನ ಬಗ್ಗೆ ಮಾತನಾಡಲು ಶುರುಮಾಡಿದರೆ ಗಂಟೆಗಟ್ಟಲೆ ಮಾತು ಸಾಗುತ್ತದೆ.

ಅಜ್ಜನ ಎಲೆ ಅಡಿಕೆ ತುಂಬಿದ ಬಾಯಿ, ಇದ್ದೂ ಇರದಂತಿದ್ದ ನಗು, ತೂಕದ ಮಾತು, ಶಿಸ್ತು, ಗತ್ತು, ಗಾಂಭೀರ್ಯ, ಇನ್ನೊಬ್ಬರ ಕುರಿತಾದ ಕಾಳಜಿ, ಗಣಪತಿಯ ಮೇಲಿದ್ದ ಭಕ್ತಿ...

ಅಜ್ಜನ ಬಗ್ಗೆ ಹೇಳೋಕೆ ಕೂತರೆ ಪಟ್ಟಿ ಉದ್ದವಾಗುತ್ತಲೇ ಹೋಗುತ್ತೆ!!
ಅಜ್ಜನ ಬಗ್ಗೆ ಹೇಳೋಕೆ ಸಾಕಷ್ಟಿದೆ, ದೈಹಿಕವಾಗಿ ಕಣ್ಣೆದುರು ಇಲ್ಲವೆಂಬುದನ್ನು ಬಿಟ್ಟರೆ, ಅಜ್ಜ ನಮ್ಮೊಳಗೆ ಸದಾ ಜೀವಂತ.

ಗಣಪತಿಯ ಅಪ್ಪಟ ಭಕ್ತರಾಗಿದ್ದ ನನ್ನ ಅಜ್ಜ ಕಣ್ಮುಚ್ಚಿ ಒಂದು ವರ್ಷವಾಯ್ತು.

ಅಜ್ಜ ನಡೆದ ಹಾದಿಯಲ್ಲೀಗ ಗರಿಕೆ ಹುಟ್ಟಿದೆ.



05/10/2018 - 05/10/2019

Comments

Popular posts from this blog

"ಕಂದ" ಪದ್ಯ

ಆಗುಂಬೆ ಎಂಬ ಹಸಿರುಲೋಕ!

ಬರಗಾಲ