Monday, 9 October 2017

ನವರಸ


ಬದುಕೆಂಬ ನಳಪಾಕ
ಭಾವನೆಯೇ ಒಗ್ಗರಣೆ
ಚಿಟಪಟನೆ ಸಿಡಿಯುವುದು
ಘಮ್ಮೆಂದು ಹರಡುವುದು
ಖಾರ ತುಸು ಮುಂದಾಗೆ
ಕಣ್ಣಾಲಿ ತುಂಬುವುದು
ಸಿಹಿ ಖಾದ್ಯ ಬಾಯ್ಗಿಡಲು
ನಾಲಿಗೆ ನಾಚುವುದು
ಉಪ್ಪು ಹದ ತಪ್ಪಿದರೆ
ಭಯಂಕರ ಕೋಪ
ಜಾಸ್ತಿ ಹುಳಿ ಹಿಂಡಿದರೆ
ಬೀಭತ್ಸ ರೂಪ
ಹೊಟ್ಟೆ ಬಿರಿ ತಿಂದರೆ
ವಾಯು ಭಾರ ಕುಸಿತ
ಬಿಗಿಹಿಡಿದು ತೇಗಿದರೆ
ಮನವು ಶಾಂತ

ಎಂಬಲ್ಲಿಗೆ ಬದುಕು ಸಂತೃಪ್ತವಾಯ್ತು
ನವರಸಗಳ ಮೇಳ ಸಂಪನ್ನವಾಯ್ತು..

- ಅನಾಸ್ಕ

No comments:

Post a Comment

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...