ಬದುಕೆಂಬ ನಳಪಾಕ
ಭಾವನೆಯೇ ಒಗ್ಗರಣೆ
ಚಿಟಪಟನೆ ಸಿಡಿಯುವುದು
ಘಮ್ಮೆಂದು ಹರಡುವುದು
ಖಾರ ತುಸು ಮುಂದಾಗೆ
ಕಣ್ಣಾಲಿ ತುಂಬುವುದು
ಸಿಹಿ ಖಾದ್ಯ ಬಾಯ್ಗಿಡಲು
ನಾಲಿಗೆ ನಾಚುವುದು
ಉಪ್ಪು ಹದ ತಪ್ಪಿದರೆ
ಭಯಂಕರ ಕೋಪ
ಜಾಸ್ತಿ ಹುಳಿ ಹಿಂಡಿದರೆ
ಬೀಭತ್ಸ ರೂಪ
ಹೊಟ್ಟೆ ಬಿರಿ ತಿಂದರೆ
ವಾಯು ಭಾರ ಕುಸಿತ
ಬಿಗಿಹಿಡಿದು ತೇಗಿದರೆ
ಮನವು ಶಾಂತ
ಎಂಬಲ್ಲಿಗೆ ಬದುಕು ಸಂತೃಪ್ತವಾಯ್ತು
ನವರಸಗಳ ಮೇಳ ಸಂಪನ್ನವಾಯ್ತು..
- ಅನಾಸ್ಕ

No comments:
Post a Comment